ಈ ಶಕ್ತಿಯುತ ಧ್ಯಾನವು ನಿಮ್ಮಲ್ಲಿನ ಒತ್ತಡವನ್ನು ಕರಗಿಸಲು ಮತ್ತು ನಿಮ್ಮಲ್ಲಿ ಶಾಂತಿಯನ್ನು ತುಂಬಿಸಲು ಸಹಾಯ ಮಾಡುತ್ತದೆ. ಇದು ಮೆದುಳಿನ ‘ಹೋರಾಟ ಅಥವಾ ಹಾರಾಟ’ ದ ಕೇಂದ್ರವಾದ ಅಮಿಗ್ಡಾಲಾವನ್ನು ವಿಶ್ರಾಂತಗೊಳಿಸುತ್ತದೆ. ನಕಾರಾತ್ಮಕ ಭಾವನೆಗಳಲ್ಲಿ ಸಿಕ್ಕಿಕೊಂಡಾಗ ಅಥವಾ ಮನಸ್ಸಿನಲ್ಲಿ ಅಸ್ತವ್ಯಸ್ತತೆ ಉಂಟಾದಾಗ, ಈ ಧ್ಯಾನವನ್ನು ಅಭ್ಯಾಸ ಮಾಡಿ, ಆತ್ಮಬಲವನ್ನು ಬೆಳೆಸಲು ಕಲಿಯಿರಿ.
ನಿರ್ಧಾರ ತೆಗೆದುಕೊಳ್ಳುವ ಸಂದರ್ಭಗಳಲ್ಲಿ ಈ ಧ್ಯಾನವನ್ನು ಬಳಸಿ. ಅದು ನಿಮ್ಮನ್ನು ಗೊಂದಲದಿಂದ ಹೊರತಂದು, ಸ್ಪಷ್ಟತೆಗೆ ಕರೆದೊಯ್ಯುತ್ತದೆ. ಪ್ರತಿ ಬಾರಿ ನೀವು ಶಾಂತಿ ಮತ್ತು ನೆಮ್ಮದಿಯ ಸ್ಥಿತಿಯನ್ನು ಪ್ರವೇಶಿಸಿದಾಗ, ಸ್ವಾಭಾವಿಕವಾಗಿಯೇ ನೀವು ಆ ಸ್ಥಿತಿಯಲ್ಲಿ ಜೀವಿಸುವುದು ಸುಲಭವಾಗುತ್ತದೆ.
ವಿಶ್ರಾಂತಿಯ ಸ್ಥಿತಿಯಲ್ಲಿರಲು ಕಲಿಯುವುದರಿಂದ,ಗೊಂದಲದಲ್ಲಿರುವ ಸಮಯದಲ್ಲಿಯೂ ಸಹ ಪ್ರಶಾಂತವಾಗಿರಲು ಸಹಾಯ ಮಾಡುತ್ತದೆ. ಈ ಧ್ಯಾನವು ದೇಹವನ್ನು ಮತ್ತಷ್ಟು ಶಾಂತಗೊಳಿಸಲು, ಧ್ವನಿಯ ಕಂಪನ ಮತ್ತು ಉಸಿರಾಟದ ಕ್ರಿಯೆಗಳನ್ನು ಬಳಸುತ್ತದೆ. ನೀವು ಶಾಂತಿಯ ಸ್ಥಿತಿಯಲ್ಲಿ ಇರಲು ಅಭ್ಯಾಸ ಮಾಡಿದಾಗ, ನಿಮ್ಮ ನೈಸರ್ಗಿಕ ಸ್ಥಿತಿಯಾದ ಆರೋಗ್ಯವು ಮರುಕಳಿಸುತ್ತದೆ. ಒಂದು ಚಟುವಟಿಕೆಯ...
ಅಗಲಿದವರ ಶಾಂತಿಗಾಗಿ ಈ ಧ್ಯಾನ
ಚೈತನ್ಯವೆಂಬುವುದು ಒಂದೇ. ಬದುಕಿರುವವರು ಹಾಗು ಮರಣಿಸಿದವರು - ಇಬ್ಬರೂ ಕೂಡ ಇದೇ ಚೈತನ್ಯದ ಒಂದು ಭಾಗ. ಮರಣಿಸಿದವರ ಆತ್ಮಕ್ಕೆ ಶಾಂತಿ ತರಲು ಮತ್ತು ಅವರಿಂದ ಆಶೀರ್ವಾದವನ್ನು ಪಡೆಯಲು ಈ ಧ್ಯಾನ ಸಹಾಯ ಮಾಡುತ್ತದೆ.